Photo Credits: @prajavani (X)
ಜೀ ಕನ್ನಡ ಚಾನೆಲ್ನ ಜನಪ್ರಿಯ ಸಂಗೀತ ರಿಯಾಲಿಟಿ ಶೋ ‘ಸರಿಗಮಪ ಲಿಟಲ್ ಚಾಂಪ್ಸ್’ ಮಹಾಫಿನಾಲೆಗೆ ಅದ್ದೂರಿ ತೆರೆ ಬಿದ್ದಿದೆ. ಈ ಬಾರಿಯ ಕಿರೀಟವನ್ನು ಮಂಗಳೂರಿನ ಪ್ರತಿಭಾವಂತ ಬಾಲಕ ಅಶ್ಮಿತ್ ತಮ್ಮದಾಗಿಸಿಕೊಂಡಿದ್ದಾರೆ.
ಅಂತಿಮ ಹಣಾಹಣಿಯಲ್ಲಿ ಮಂಗಳೂರಿನ ಇಬ್ಬರು ಸ್ಪರ್ಧಿಗಳು ವಿನ್ನರ್ ಹಾಗೂ ರನ್ನರ್ ಅಪ್ ಪಟ್ಟ ಪಡೆದಿದ್ದಾರೆ. ಈ ಮೂಲಕ ಕರಾವಳಿ ಭಾಗಕ್ಕೆ ಬೃಹತ್ ಗೆಲುವು ಸಿಕ್ಕಂತಾಗಿದೆ.
ಎರಡು ಹಂತಗಳಲ್ಲಿ ನಡೆದ ಈ ಮಹಾಸಂಗ್ರಾಮದ ಅಂತಿಮ ಸುತ್ತಿಗೆ ಒಟ್ಟು 6 ಬಾಲಪ್ರತಿಭೆಗಳು ಅರ್ಹತೆ ಪಡೆದಿದ್ದರು. ಆರು ಸ್ಪರ್ಧಿಗಳ ನಡುವೆ ನಡೆದ ರೋಚಕ ಪೈಪೋಟಿಯಲ್ಲಿ ಅಶ್ಮಿತ್ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಅಶ್ಮಿತ್ಗೆ ಒಲಿದ ಟ್ರೋಫಿ ಮತ್ತು ಲಕ್ಷಾಂತರ ರೂಪಾಯಿ ಬಹುಮಾನ…
ಗಾಯಕಿ ಇಂದು ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಬೆಳೆದ ಅಶ್ಮಿತ್ ಅತ್ಯುತ್ತಮ ಪ್ರದರ್ಶನ ನೀಡಿದರು. ಅದ್ಭುತ ಗಾಯನದ ಜೊತೆಗೆ ವಯೊಲಿನ್ ವಾದನದಲ್ಲೂ ತಮ್ಮ ಶ್ರೇಷ್ಠ ಪ್ರತಿಭೆಯನ್ನು ಪ್ರದರ್ಶಿಸಿದರು.
ಫಿನಾಲೆಯಲ್ಲಿ ಕಠಿಣ ಪೈಪೋಟಿಯನ್ನು ಮೆಟ್ಟಿ ನಿಂತು ಅವರು ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ವಿಜೇತರಾದ ಅಶ್ಮಿತ್ಗೆ ಜೀ ಕನ್ನಡದ ‘ಸರಿಗಮಪ’ ಟ್ರೋಫಿಯೊಂದಿಗೆ ಬರೋಬ್ಬರಿ 20 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ.
ಮೊದಲ ರನ್ನರ್ ಅಪ್ ಆಗಿ ಅಚಿಂತ್ಯ ರೈ ಮಿಂಚು…
ಅಶ್ಮಿತ್ಗೆ ಕೊನೆಯ ಕ್ಷಣದವರೆಗೂ ತೀವ್ರ ಪೈಪೋಟಿ ನೀಡಿದ ಮಂಗಳೂರಿನ ಮತ್ತೊಬ್ಬ ಪ್ರತಿಭೆ ಅಚಿಂತ್ಯ ರೈ. ಅವರು ಈ ಸೀಸನ್ನ ಮೊದಲ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ರೋಚಕವಾಗಿ ನಡೆದ ಅಂತಿಮ ಸುತ್ತಿನಲ್ಲಿ ಅಚಿಂತ್ಯ ಅವರ ಗಾಯನವೂ ಪ್ರೇಕ್ಷಕರ ಮನ ಗೆದ್ದಿತು. ಇವರಿಗೆ ರನ್ನರ್ ಅಪ್ ಟ್ರೋಫಿ ಜೊತೆಗೆ 15 ಲಕ್ಷ ರೂಪಾಯಿ ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು.
ಒಟ್ಟಿನಲ್ಲಿ ಈ ಬಾರಿಯ ‘ಸರಿಗಮಪ ಲಿಟಲ್ ಚಾಂಪ್ಸ್’ ಅಂತಿಮ ಸಮರದಲ್ಲಿ ಮಂಗಳೂರಿನ ಈ ಇಬ್ಬರು ಚಿಣ್ಣರು ‘ಡಬಲ್ ಧಮಾಕಾ’ ಸೃಷ್ಟಿಸಿ ಇತಿಹಾಸ ಬರೆದಿದ್ದಾರೆ.




