ಡಿವೋರ್ಸ್ ಬೆನ್ನಲ್ಲೇ ನಾಗರತ್ನಾ ಭಾವುಕ ಪೋಸ್ಟ್ ವೈರಲ್

ಮಕ್ಕಳಿಗಾಗಿ ಸಹಿಸಿಕೊಂಡೆ: ನಾಗರತ್ನಾ ಭಾವುಕ ಪೋಸ್ಟ್

Photo Credits: @cineloka (Instagram) ಸ್ಯಾಂಡಲ್‌ವುಡ್‌ನ ಖ್ಯಾತ ನಟ ದುನಿಯಾ ವಿಜಯ್ ಹಾಗೂ ಅವರ ಪತ್ನಿ ನಾಗರತ್ನಾ ಅವರ ದಾಂಪತ್ಯ ಜೀವನಕ್ಕೆ ಕಾನೂನಾತ್ಮಕವಾಗಿ ಅಧಿಕೃತ ತೆರೆಬಿದ್ದಿದೆ. ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿದ್ದ ಈ ವೈವಾಹಿಕ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠವು ಡಿವೋರ್ಸ್ ಮಂಜೂರು ಮಾಡಿದೆ. ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಹೆಚ್. ಶಾಂತಿಭೂಷಣ್ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡಿದೆ. ಈ ಮೂಲಕ ಹಲವು ವರ್ಷಗಳಿಂದ ನಡೆಯುತ್ತಿದ್ದ […]

ಜನ್ಮಾಷ್ಟಮಿಯಂದೇ ಗಂಡು ಮಗುವಿಗೆ ಜನ್ಮ ನೀಡಿದ ಹರ್ಷಿಕಾ

ಮೊದಲ ಮಗಳು ತ್ರಿದೇವಿಗೆ ತಮ್ಮ: ಭುವನ್ ಪೊನ್ನಣ್ಣ ಸಂತಸ

Photo Credits: @harshikapoonachaofficial (Instagram) ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಗೂ ಮುದ್ದಾದ ತಾರಾದಂಪತಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರ ಕುಟುಂಬಕ್ಕೆ ಎರಡನೇ ಮಗುವಿನ ಆಗಮನವಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯ ಅತ್ಯಂತ ಪವಿತ್ರ ದಿನದಂದೇ ನಟಿ ಹರ್ಷಿಕಾ ಪೂಣಚ್ಚ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಅಪರೂಪದ ಸಂಭ್ರಮದ ಸುದ್ದಿಯನ್ನು ಹಂಚಿಕೊಂಡಿರುವ ದಂಪತಿ, ತಮ್ಮ ಮನೆಗೆ ‘ಚೋಟು ಕೃಷ್ಣ’ ಬಂದಿದ್ದಾನೆ ಎಂದು ಅತ್ಯಂತ ಸಂತಸದಿಂದ ಹೇಳಿಕೊಂಡಿದ್ದಾರೆ. ಜತೆಗೆ ಮಗುವಿನ ಮುಂಗೈನ ಮುದ್ದಾದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಪ್ರೀತಿ […]

‘ಗೃಹಲಕ್ಷ್ಮಿ’ ಫಲಾನುಭವಿಗಳಿಗೆ ಸಿಹಿ ಸುದ್ದಿ; ಮರುಪರಿಷ್ಕರಣೆ ನಡುವೆಯೂ ಖಾತೆಗೆ ಜಮೆಯಾಗಲಿದೆ ಹಣ

'ಗೃಹಲಕ್ಷ್ಮಿ' ಫಲಾನುಭವಿಗಳಿಗೆ ಸಿಹಿ ಸುದ್ದಿ

Photo Credits: @ashwith_shetty_kodlady (Instagram) ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ‘ಗೃಹಲಕ್ಷ್ಮಿ’ ಯೋಜನೆಯ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿರುವ ನಡುವೆಯೇ, ಮಹಿಳೆಯರಿಗೆ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಸರ್ವೆ ನಡೆಯುತ್ತಿರುವ ಕಾರಣ ಹಣ ಕೈತಪ್ಪಬಹುದು ಎಂಬ ಆತಂಕದಲ್ಲಿದ್ದ ಮಹಿಳೆಯರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಯೋಜನೆಯ ಬಾಕಿ ಉಳಿದಿರುವ ಕಂತಿನ ಹಣವನ್ನು ಇದೇ ತಿಂಗಳಲ್ಲಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಅನರ್ಹರನ್ನು ಪತ್ತೆ ಹಚ್ಚಲು ಮನೆ ಮನೆ ಸರ್ವೆ ನಡೆಯುತ್ತಿದ್ದರೂ, […]

ದಿನಭವಿಷ್ಯ: ಇಂದು ಈ ರಾಶಿಯವರು ಕಳೆದುಕೊಂಡಿದ್ದನ್ನು ಅನ್ಯಮಾರ್ಗದಿಂದ ಪಡೆಯುವರು; ನಿಮ್ಮ ರಾಶಿ ಫಲ ಹೇಗಿದೆ?

ಇಂದಿನ ಪಂಚಾಂಗ (04 ಸೆಪ್ಟೆಂಬರ್ 2026)

Photo Credits: AI Generated ಸೆಪ್ಟೆಂಬರ್ 04, 2026 ರ ನಿತ್ಯ ಭವಿಷ್ಯವು ನಿಮ್ಮ ರಾಶಿ ಫಲವನ್ನು ವಿವರವಾಗಿ ತಿಳಿಸುತ್ತದೆ. ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಗಳಿಗೆ ಇಂದು ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಸವಾಲುಗಳನ್ನು ಎದುರಿಸುವ ಧೈರ್ಯ, ನಿರ್ಧಾರಗಳು ಹಾಗೂ ದಿನದ ಆರ್ಥಿಕ ಸ್ಥಿತಿಯ ಕುರಿತು ಮಾರ್ಗದರ್ಶನ ಇಲ್ಲಿದೆ. ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಕೃಷ್ಣ ಪಕ್ಷದ ಸಪ್ತಮೀ ತಿಥಿಯ ಶುಕ್ರವಾರದಂದು […]

ಚೈತ್ರಾ ರಾವ್ ಸರಳ ವಿವಾಹ; ‘ಜೋಡಿಹಕ್ಕಿ’ ಜಾನಕಿ ಟೀಚರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಭ್ರಮ

ನಟಿ ಚೈತ್ರಾ ರಾವ್ ಸರಳ ವಿವಾಹ

Photo Credits: @chaithrarao_official (Instagram) ಕನ್ನಡ ಕಿರುತೆರೆಯಲ್ಲಿ ತಮ್ಮ ನಟನೆಯ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಪ್ರತಿಭಾವಂತ ನಟಿ ಚೈತ್ರಾ ರಾವ್ ಹೊಸ ಜೀವನದ ಅಧ್ಯಾಯವನ್ನು ಆರಂಭಿಸಿದ್ದಾರೆ. ಯಾವುದೇ ಆಡಂಬರ ಹಾಗೂ ಅದ್ಧೂರಿತನವಿಲ್ಲದೆ ಅತ್ಯಂತ ಸರಳವಾಗಿ ಹಸೆಮಣೆ ಏರಿದ್ದಾರೆ. ಇತ್ತೀಚೆಗಷ್ಟೇ ಪ್ರಸಾರ ಮುಕ್ತಾಯ ಕಂಡ ‘ಭಾರ್ಗವಿ ಎಲ್‌ಎಲ್‌ಬಿ’ ಧಾರಾವಾಹಿಯ ಮೂಲಕ ಗಮನ ಸೆಳೆದಿದ್ದ ಚೈತ್ರಾ, ರಂಗಭೂಮಿ ಕಲಾವಿದ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಕೌಶಿಕ್ ಅವರ ಕೈಹಿಡಿದಿದ್ದಾರೆ. ಕ್ಯಾಮೆರಾ ಹಾಗೂ ಲೈಮ್‌ಲೈಟ್ ಬದಿಗೊತ್ತಿ, ಎರಡೂ ಕುಟುಂಬಗಳ ಹಿರಿಯರು […]

ನಾಗರತ್ನ ಜೊತೆಗಿನ ದಾಂಪತ್ಯಕ್ಕೆ ಕಾನೂನಾತ್ಮಕ ತೆರೆ: ವಿಚ್ಛೇದನದ ಬಳಿಕ ದುನಿಯಾ ವಿಜಯ್ ಭಾವುಕ ಪೋಸ್ಟ್

ವಿಚ್ಛೇದನದ ಬಳಿಕ ದುನಿಯಾ ವಿಜಯ್ ಭಾವುಕ ಪೋಸ್ಟ್

Photo Credits: @duniyavijayofficial (Instagram) ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಮತ್ತು ಅವರ ಪತ್ನಿ ನಾಗರತ್ನ ಅವರ ದಾಂಪತ್ಯ ಜೀವನಕ್ಕೆ ಇದೀಗ ಕಾನೂನಾತ್ಮಕವಾಗಿ ಅಧಿಕೃತ ತೆರೆಬಿದ್ದಿದೆ. ಸುದೀರ್ಘ ವರ್ಷಗಳಿಂದ ನ್ಯಾಯಾಲಯದಲ್ಲಿದ್ದ ಈ ಪ್ರಕರಣಕ್ಕೆ ಹೈಕೋರ್ಟ್ ಆದೇಶ ನೀಡಿದೆ. ಈ ಕೌಟುಂಬಿಕ ಪ್ರಕರಣದ ತೀರ್ಪು ಹೊರಬಿದ್ದ ಬೆನ್ನಲ್ಲೇ ನಟ ದುನಿಯಾ ವಿಜಯ್ ಅವರು ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಆಪ್ತ ಅಭಿಮಾನಿಗಳು ಹಾಗೂ ಮಾಧ್ಯಮ ಮಿತ್ರರಲ್ಲಿ ಕಳಕಳಿಯ ಮನವಿಯೊಂದನ್ನು […]

‘ಪ್ರೇಮಲೋಕದ ಪಾರಿಜಾತವೇ’ ಹಾಡು ಸೃಷ್ಟಿಯಾಗಿದ್ದು ಹೇಗೆ?

'ಪ್ರೇಮಲೋಕದ ಪಾರಿಜಾತವೇ' ಹಾಡು

Photo Credits: @drhamsalekha (Instagram) ಕನ್ನಡ ಚಿತ್ರರಂಗದಲ್ಲಿ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಹಾಗೂ ನಾದಬ್ರಹ್ಮ ಹಂಸಲೇಖ ಅವರ ಕಾಂಬಿನೇಷನ್ ಸೃಷ್ಟಿಸಿದ ಜಾದೂ ಪ್ರತಿಯೊಬ್ಬ ಸಿನೆಮಾ ಪ್ರಿಯರಿಗೂ ತಿಳಿದಿದೆ. ಇಬ್ಬರ ಜುಗಲ್ಬಂದಿಯಲ್ಲಿ ಮೂಡಿಬಂದ ಪ್ರತಿಯೊಂದು ಹಾಡುಗಳು ಕೂಡ ಸಾರ್ವಕಾಲಿಕ ಹಿಟ್ ಸಾಲಿಗೆ ಸೇರಿವೆ. ಆದರೆ, ಇವರಿಬ್ಬರ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಕಾಲಘಟ್ಟದಲ್ಲಿ ‘ಜಾಣ’ ಸಿನಿಮಾದ ಸೂಪರ್ ಹಿಟ್ ಹಾಡೊಂದರ ಕಂಪೋಸಿಂಗ್ ವೇಳೆ ನಡೆದ ಆಸಕ್ತಿಕರ ವಿಷಯವೊಂದು ಬೆಳಕಿಗೆ ಬಂದಿದೆ. ನಿರ್ದೇಶಕ ಶಿವಮಣಿ ಬೇಡ ಎಂದಿದ್ದ ಟ್ಯೂನ್ ‘ಜಾಣ’ ಚಿತ್ರದ […]

ಬಿಡುಗಡೆಗೆ ಸಿದ್ಧವಾಯ್ತು ‘ಟಾಕ್ಸಿಕ್’ ಇಂಗ್ಲಿಷ್ ಆವೃತ್ತಿ; ಕೆಲ ಪ್ರಮುಖ ಬದಲಾವಣೆಗಳೊಂದಿಗೆ ರಿಲೀಸ್

'ಟಾಕ್ಸಿಕ್' ಧಮಾಕಾ

Photo Credits: @kvn.productions (Instagram) ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾಗಿ ಹತ್ತು ದಿನಗಳು ಪೂರೈಸುತ್ತಿವೆ. ದೇಶಾದ್ಯಂತ ಬಿಡುಗಡೆಯಾಗಿರುವ ಭಾರತೀಯ ಆವೃತ್ತಿಗಳು ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆಯನ್ನು ಪಡೆದುಕೊಂಡಿವೆ. ಈ ಸಿನಿಮಾವನ್ನು ಆರಂಭದಲ್ಲೇ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಶೂಟಿಂಗ್ ಮಾಡಲಾಗಿತ್ತು. ಕನ್ನಡದಲ್ಲಿ ಚಿತ್ರೀಕರಿಸಿದ ಆವೃತ್ತಿಯನ್ನು ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಿಗೆ ಡಬ್ ಮಾಡಿ ಪ್ರದರ್ಶಿಸಲಾಗಿತ್ತು. ಇದೀಗ ಭಾರತೀಯ ಭಾಷೆಗಳ ಆವೃತ್ತಿ ರಿಲೀಸ್ ಆದ 10 ದಿನಗಳ […]

ದರ್ಶನ್‌ಗೆ ಬಿಡದ ಸಂಕಷ್ಟ: ಒಂದಾದ ಮೇಲೊಂದರಂತೆ ಶಾಕ್

ನಟ ದರ್ಶನ್ಗೆ ಒಂದರ ಮೇಲೊಂದರಂತೆ ಸಂಕಷ್ಟಗಳು ಎದುರಾಗುತ್ತಿವೆ

Photo Credits: @rock_star_vishwa07 (Instagram) ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲು ಪಾಲಾಗಿರುವ ನಟ ದರ್ಶನ್ ಅವರಿಗೆ ಸಂಕಷ್ಟಗಳು ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಕಾನೂನು ಸಮರದಲ್ಲಿ ಒಂದಾದ ಮೇಲೊಂದರಂತೆ ಎದುರಾಗುತ್ತಿರುವ ಹೊಸ ಸವಾಲುಗಳು ದರ್ಶನ್ ಹಾಗೂ ಅವರ ತಂಡಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿವೆ. ಇತ್ತೀಚೆಗಷ್ಟೇ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಪ್ರದೋಷ್ ಮಾಫಿ ಸಾಕ್ಷಿಯಾಗಲು ಮುಂದಾಗಿದ್ದ ಬೆಳವಣಿಗೆಯಿಂದ ದರ್ಶನ್ ಹಾಗೂ ಅವರ ಡಿ-ಗ್ಯಾಂಗ್ ತೀವ್ರ ಆತಂಕಕ್ಕೆ ಒಳಗಾಗಿತ್ತು. ಆ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಹೈಕೋರ್ಟ್ ಮೊರೆ […]

ಜೈಲಲಿತಾ ನಟಿ ಮನಸ್ವಿ ಎಕ್ಸ್‌ಕ್ಲೂಸಿವ್ ಇಂಟರ್ವ್ಯೂ

'ಜೈಲಲಿತ' ಸೀರಿಯಲ್ನಲ್ಲಿ ಬಿಂದಾಸ್ ಲಲಿತಾ ಪಾತ್ರದ ಮೂಲಕ ವೀಕ್ಷಕರ ಮನಗೆದ್ದಿರುವ ನಟಿ ಮನಸ್ವಿ

Photo Credits: @manasvi_maanu11 (Instagram) ‘ಜೈಲಲಿತ’ ಸೀರಿಯಲ್‌ನಲ್ಲಿ ಬಿಂದಾಸ್ ಲಲಿತಾ ಪಾತ್ರದ ಮೂಲಕ ವೀಕ್ಷಕರ ಮನಗೆದ್ದಿರುವ ನಟಿ ಮನಸ್ವಿ ತಮ್ಮ ಸೀರಿಯಲ್ ಜರ್ನಿ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಆರಂಭದಲ್ಲಿ ತಮ್ಮ ನೈಜ ವ್ಯಕ್ತಿತ್ವಕ್ಕೆ ತೀರಾ ಅಪೋಸಿಟ್ ಅನಿಸಿದ್ದ ಲಲಿತಾ ಪಾತ್ರ, ಹೋಗ್ತಾ ಹೋಗ್ತಾ ತಮ್ಮ ಮನಸ್ಸಿಗೆ ತುಂಬಾ ಹತ್ತಿರವಾಯಿತು ಎಂದು ಹೇಳಿಕೊಂಡಿದ್ದಾರೆ. ಸೀರಿಯಲ್‌ನಲ್ಲಿ ಯಶ್ ಫ್ಯಾನ್ ಆಗಿದ್ದ ಲಲಿತಾಗೆ ಈಗ ಜೈ ಮೇಲೆ ಪ್ರೀತಿ ಶುರುವಾಗಿದ್ದು, ಈ ಲವ್ ಟ್ರ್ಯಾಕ್ ಹಾಗೂ ಅತ್ತೆಯ […]