MAGICC SHORT FILM: ರಿಷಬ್ ಶೆಟ್ಟಿ ಹೊಸ ಸಾಹಸ; ಗಿಮಿಕ್ ಅಲ್ಲ, ಇದು ನಿಜವಾದ ‘ಮ್ಯಾಜಿಕ್’

Photo Credits: @rishabshettyfilms (Instagram) @aadityabpujar (Instagram) ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಚಿತ್ರ ನಿರ್ಮಾಣದಿಂದ ಹಿಂದೆ ಸರಿದಿಲ್ಲ. ಆರಂಭದಿಂದಲೂ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಾ ಬಂದಿರುವ ಅವರು ಇದೀಗ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ತಮ್ಮ ‘ರಿಷಬ್ ಶೆಟ್ಟಿ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಅವರು ‘ಮ್ಯಾಜಿಕ್’ ಎಂಬ ವಿಶಿಷ್ಟ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ಹಿರಿಯ ಸಾಹಿತಿ ಹಾಗೂ ಸಿನಿಮಾ ಪತ್ರಕರ್ತ ಜೋಗಿ ಅವರ ಕತೆಯನ್ನು ಆಧರಿಸಿ ಈ ಚಿತ್ರ ರೂಪಿಸಲಾಗಿದೆ. ಆಗಸ್ಟ್ 23ರಂದು ಈ […]
RENUKASWAMY CASE: ಮಾಫಿ ಸಾಕ್ಷಿ ಆಗ್ತಾರಾ ಪ್ರದೋಷ್? ಇಂದು ಹೊರಬೀಳಲಿದೆ ಬಿಗ್ ಆರ್ಡರ್

Photo Credits: @tnitkannada (Instagram) ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯದಲ್ಲಿ ಮಹತ್ವದ ಬೆಳವಣಿಗೆ ನಡೆಯಲಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಪ್ರದೋಷ್ ಸಲ್ಲಿಸಿರುವ ಮಾಫಿ ಸಾಕ್ಷಿ ಅರ್ಜಿಯ ಕುರಿತು ಇಂದು ಕೋರ್ಟ್ ಆದೇಶ ಹೊರಡಿಸುವ ಸಾಧ್ಯತೆಯಿದೆ. ಈ ಆದೇಶಕ್ಕೂ ಮುನ್ನ ಆರೋಪಿ ಪ್ರದೋಷ್ ಕುರಿತು ಕೋರ್ಟ್ ಕೇಳಿದ್ದ ಪ್ರಮುಖ ವರದಿಯನ್ನು ಜೈಲು ಅಧಿಕಾರಿಗಳು ಇಂದು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ಅಧಿಕಾರಿಗಳು ನೀಡುವ ವರದಿಯ ಆಧಾರದ ಮೇಲೆಯೇ ಮುಂದಿನ ನಿರ್ಧಾರ ಹೊರಬೀಳಲಿದೆ. ಜೈಲಿನಲ್ಲಿ ಪ್ರದೋಷ್ ಅವರ […]
SA RE GA MA PA: ‘ಸರಿಗಮಪ’ ಟ್ರೋಫಿ ಗೆದ್ದ ಮಂಗಳೂರಿನ ಅಶ್ಮಿತ್; ಸಿಕ್ಕ ನಗದು ಬಹುಮಾನ ಎಷ್ಟು ಗೊತ್ತಾ?

Photo Credits: @prajavani (X) ಜೀ ಕನ್ನಡ ಚಾನೆಲ್ನ ಜನಪ್ರಿಯ ಸಂಗೀತ ರಿಯಾಲಿಟಿ ಶೋ ‘ಸರಿಗಮಪ ಲಿಟಲ್ ಚಾಂಪ್ಸ್’ ಮಹಾಫಿನಾಲೆಗೆ ಅದ್ದೂರಿ ತೆರೆ ಬಿದ್ದಿದೆ. ಈ ಬಾರಿಯ ಕಿರೀಟವನ್ನು ಮಂಗಳೂರಿನ ಪ್ರತಿಭಾವಂತ ಬಾಲಕ ಅಶ್ಮಿತ್ ತಮ್ಮದಾಗಿಸಿಕೊಂಡಿದ್ದಾರೆ. ಅಂತಿಮ ಹಣಾಹಣಿಯಲ್ಲಿ ಮಂಗಳೂರಿನ ಇಬ್ಬರು ಸ್ಪರ್ಧಿಗಳು ವಿನ್ನರ್ ಹಾಗೂ ರನ್ನರ್ ಅಪ್ ಪಟ್ಟ ಪಡೆದಿದ್ದಾರೆ. ಈ ಮೂಲಕ ಕರಾವಳಿ ಭಾಗಕ್ಕೆ ಬೃಹತ್ ಗೆಲುವು ಸಿಕ್ಕಂತಾಗಿದೆ. ಎರಡು ಹಂತಗಳಲ್ಲಿ ನಡೆದ ಈ ಮಹಾಸಂಗ್ರಾಮದ ಅಂತಿಮ ಸುತ್ತಿಗೆ ಒಟ್ಟು 6 ಬಾಲಪ್ರತಿಭೆಗಳು ಅರ್ಹತೆ […]
YASH TOXIC: ಆಗಸ್ಟ್ 26ಕ್ಕೆ ‘ಟಾಕ್ಸಿಕ್’ ರಿಲೀಸ್; ತೆಲುಗು ರಾಜ್ಯಗಳಲ್ಲಿ ಬುಕಿಂಗ್ ತಡವಾಗುತ್ತಿರೋದು ಏಕೆ?

Photo Credits: @cellebindia (Instagram) ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ಬಿಡುಗಡೆಯಾಗಲಿದೆ. ಕರ್ನಾಟಕ ಸೇರಿದಂತೆ ದೇಶದ ಅನೇಕ ಕಡೆಗಳಲ್ಲಿ ಮುಂಗಡ ಟಿಕೆಟ್ ಬುಕಿಂಗ್ ಭರದಿಂದ ಸಾಗಿದೆ. ಆದರೆ ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಇನ್ನೂ ಬುಕಿಂಗ್ ಆರಂಭವಾಗಿಲ್ಲ. ಬಿಡುಗಡೆಗೆ ಕೇವಲ ಎರಡು ದಿನ ಬಾಕಿ ಇರುವಾಗ ಬುಕಿಂಗ್ ಓಪನ್ ಆಗದಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಕರ್ನಾಟಕದಲ್ಲಿ ಬಹುತೇಕ ಶೋಗಳು ಈಗಾಗಲೇ ಹೌಸ್ಫುಲ್ ಆಗಿವೆ. ಹೀಗಿದ್ದರೂ ತೆಲುಗು ನಾಡಿನಲ್ಲಿ ಬುಕಿಂಗ್ ತಡವಾಗುತ್ತಿರುವುದರ […]
OM PRAKASH RAO: ‘ಫೋನ್ ಎತ್ತಲ್ಲ ಅನ್ನೋದೆಲ್ಲ ನಾಟಕ’; ಹೂಡಿಕೆದಾರರಿಗೆ ಓಂ ಪ್ರಕಾಶ್ ರಾವ್ ಕೌಂಟರ್

Photo Credits: @mownesh_official (Instagram) ಸಾಲು ಸಾಲು ಆಕ್ಷನ್ ಸಿನಿಮಾಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ಹೆಸರು ಮಾಡಿರುವ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಇದೀಗ ದೊಡ್ಡ ವಿವಾದಕ್ಕೆ ಸಿಲುಕಿದ್ದಾರೆ. ‘ಫೀನಿಕ್ಸ್’ ಎಂಬ ಹೊಸ ಸಿನಿಮಾದ ನಿರ್ಮಾಣಕ್ಕಾಗಿ ಹೂಡಿಕೆದಾರರಿಂದ ಕೋಟ್ಯಂತರ ರೂ ಪಾಯಿ ಪಡೆದು ವಂಚಿಸಿದ್ದಾರೆ ಎಂಬ ಗಂಭೀರ ಆರೋಪ ಅವರ ಮೇಲೆ ಬಂದಿದೆ. ತಮ್ಮ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿಬರುತ್ತಿದ್ದಂತೆಯೇ ನಿರ್ದೇಶಕ ಓಂ ಪ್ರಕಾಶ್ ರಾವ್ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಹೂಡಿಕೆದಾರರು ಮಾಡುತ್ತಿರುವ ಪ್ರತಿಯೊಂದು ಆಪಾದನೆಗೂ […]
TOXIC MOVIE: ‘ಟಾಕ್ಸಿಕ್’ ಸೆಟ್ನಲ್ಲಿ ಯಶ್ ಹವಾ; ಫಿದಾ ಆದ ನಯನತಾರಾ

Photo Credits: @plumeriamoviess (Instagram) ದಕ್ಷಿಣ ಭಾರತದ ‘ಲೇಡಿ ಸೂಪರ್ಸ್ಟಾರ್’ ನಯನತಾರಾ ನಟ ಯಶ್ ಬಗ್ಗೆ ಆಡಿರುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ತಮ್ಮ ಹೊಸ ಸಿನಿಮಾದ ಪ್ರಮೋಷನ್ ವೇಳೆ ನೀಡಿದ ಸಂದರ್ಶನದಲ್ಲಿ ಅವರು ಯಶ್ ಅವರ ಶ್ರಮವನ್ನು ಕೊಂಡಾಡಿದ್ದಾರೆ. ಯಶ್ ಅವರ ಕೆಲಸದ ಶೈಲಿ ಹಾಗೂ ವ್ಯಕ್ತಿತ್ವದ ಬಗ್ಗೆ ನಯನತಾರಾ ಮುಕ್ತಕಂಠದಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಶ್ ಅವರ ಬದ್ಧತೆ ನೋಡಿ ತಮಗೆ ಆಶ್ಚರ್ಯವಾಗಿದೆ ಎಂದು ಅವರು ಹೇಳಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರ ಶ್ರಮದ […]
ದಿನಭವಿಷ್ಯ: ಇಂದು ಈ ರಾಶಿಯವರು ಮನೆಯ ಆರ್ಥಿಕ ಹೊಣೆಯನ್ನು ಹೊರಬೇಕಾಗುತ್ತದೆ; ಯಾರಿಗೆ ಶುಭ?

Photo Credits: AI Generated ಆಗಸ್ಟ್ 24, 2026 ರ ನಿತ್ಯ ಭವಿಷ್ಯವು ನಿಮ್ಮ ರಾಶಿ ಫಲವನ್ನು ವಿವರವಾಗಿ ತಿಳಿಸುತ್ತದೆ. ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಗಳಿಗೆ ಇಂದು ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಪ್ರಮುಖ ನಿರ್ಧಾರಗಳು, ವೃತ್ತಿ ಪ್ರಗತಿ ಮತ್ತು ಆರ್ಥಿಕ ಸ್ಥಿತಿಯ ಕುರಿತು ಮಾರ್ಗದರ್ಶನ ಇಲ್ಲಿದೆ. ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ದ್ವಾದಶೀ ತಿಥಿಯ ಸೋಮವಾರದಂದು ಸಹಾಯದ […]
DEEWANA MOVIE: SRK ‘ದೀವಾನಾ’ ಚಿತ್ರದ ಸೂಪರ್ ಹಿಟ್ ಹಾಡಿನ ಹಿಂದಿದೆ ಕನ್ನಡದ ಲಿಂಕ್

Photo Credits: @all_movies_2k (Instagram) @nfaiofficial (Instagram) ಬಾಲಿವುಡ್ ‘ಬಾದ್ಶಾ’ ಶಾರುಖ್ ಖಾನ್ ಅವರ ಚೊಚ್ಚಲ ಸಿನಿಮಾ ‘ದೀವಾನಾ’ (1992) ಭಾರತೀಯ ಚಿತ್ರರಂಗದಲ್ಲಿ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಈ ಸಿನಿಮಾದ “ಐಸಿ ದೀವಾನಗಿ ದೇಖಿ ನಹಿ ಕಭಿ” ಹಾಡು ಅಂದಿನಿಂದ ಇಂದಿನವರೆಗೂ ಪ್ರೇಕ್ಷಕರ ನೆಚ್ಚಿನ ರೊಮ್ಯಾಂಟಿಕ್ ಸಾಂಗ್ ಆಗಿ ಉಳಿದುಕೊಂಡಿದೆ. ಆದರೆ, ಈ ಹಿಟ್ ಹಿಂದಿ ಹಾಡಿನ ಮೂಲ ರಾಗ ಮೂಡಿಬಂದಿದ್ದು ನಮ್ಮ ಕನ್ನಡ ಚಿತ್ರರಂಗದಿಂದ ಎಂಬುದು ಎಷ್ಟು ಜನಕ್ಕೆ ಗೊತ್ತು? ಕನ್ನಡದಿಂದ ಪ್ರಾರಂಭವಾದ ಸುಂದರ […]
SAPTA SAGARADAACHE ELLO: ‘ಹಿಟ್ ಅಂಡ್ ರನ್’ ಘಟನೆಯೇ ‘ಸಪ್ತ ಸಾಗರ’ ಕಥೆಯಾಯ್ತಾ?

Photo Credits: @hemanthrao11 (Instagram) ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಭಾವುಕ ಕಥೆ ಪ್ರೇಕ್ಷಕರ ಮನ ಮುಟ್ಟಿತ್ತು. ಆದರೆ ಈ ರೋಮಾಂಚಕ ಹಾಗೂ ಹೃದಯಸ್ಪರ್ಶಿ ಕಥೆಯ ಹಿಂದೆ ಒಂದು ನೈಜ, ದುಃಖದ ಘಟನೆ ಅಡಗಿದೆ ಎಂಬುದನ್ನು ನಿರ್ದೇಶಕ ಹೇಮಂತ್ ಎಂ. ರಾವ್ ಬಹಿರಂಗಪಡಿಸಿದ್ದಾರೆ. ಕಣ್ಣೆದುರೇ ನಡೆದ ಆ ಒಂದು ಭೀಕರ ಅಪಘಾತ… ಸಂದರ್ಶನವೊಂದರಲ್ಲಿ ಮಾತನಾಡಿದ ನಿರ್ದೇಶಕ ಹೇಮಂತ್ ರಾವ್, ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಕಥೆ ಹುಟ್ಟಲು ಕಾರಣವಾದ ಘಟನೆಯನ್ನು ಹಂಚಿಕೊಂಡಿದ್ದಾರೆ. […]
BIGG BOSS SEASON 13: ಬಿಗ್ ಬಾಸ್ ಪ್ರೇಕ್ಷಕರಿಗೆ ಕಾಯುವಿಕೆ ಅಂತ್ಯ; ಸೆಪ್ಟೆಂಬರ್ 6 ರಿಂದ ಶುರು ದೊಡ್ಮನೆಯ ಅಸಲಿ ಆಟ

Photo Credits: @colorskannadaofficial (Instagram) ಕನ್ನಡ ಕಿರುತೆರೆಯ ಇತಿಹಾಸದಲ್ಲೇ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ನೂತನ ಸೀಸನ್ ಆರಂಭಕ್ಕೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಯಾವಾಗ ಶೋ ಶುರುವಾಗಲಿದೆ ಎಂದು ಕಾಯುತ್ತಿದ್ದ ಪ್ರೇಕ್ಷಕರಿಗೆ ಪ್ರೋಮೋ ಮೂಲಕ ಬಿಗ್ ಸರ್ಪ್ರೈಸ್ ಸಿಕ್ಕಿದೆ. ಇದೇ ಸೆಪ್ಟೆಂಬರ್ 6 ರಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಅಧಿಕೃತವಾಗಿ ಆರಂಭವಾಗಲಿದೆ ಎಂದು ಖುದ್ದು ಕಿಚ್ಚ ಸುದೀಪ್ ತಿಳಿಸಿದ್ದಾರೆ. ಈ ಮಾಹಿತಿಯೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆ […]