TOXIC MOVIE NAMMA METRO PROMOTION: ನಮ್ಮ ಮೆಟ್ರೋ ಮೇಲೆ ‘ಟಾಕ್ಸಿಕ್’ ಹವಾ: ರಾಜಧಾನಿಯಲ್ಲಿ ‘ಡ್ಯಾಡಿ ಇಸ್ ಹೋಮ್’ ಮಾಸ್ ಪ್ರಚಾರ…

ನಮ್ಮ ಮೆಟ್ರೋ ಮೇಲೆ ಟಾಕ್ಸಿಕ್ ಹವಾ...

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಕೌಂಟ್‌ಡೌನ್ ಶುರುವಾಗಿದೆ. ಆಗಸ್ಟ್ 26ರಂದು ಪ್ರಪಂಚದಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮೊನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳು ಪ್ರಚಾರದ ಕಿಚ್ಚು ಹೊತ್ತಿಸಿವೆ. ಇದೀಗ ಬೆಂಗಳೂರಿನ ಜೀವನಾಡಿ ‘ನಮ್ಮ ಮೆಟ್ರೋ’ ರೈಲುಗಳ ಮೇಲೆ ಯಶ್ ಪೋಸ್ಟರ್‌ಗಳು ರಾರಾಜಿಸುತ್ತಿದ್ದು, ಮೆಟ್ರೋ ಪ್ರಯಾಣಿಕರ ಕಣ್ಣು ಕುಕ್ಕುತ್ತಿವೆ. ಮೆಜೆಸ್ಟಿಕ್‌ನಲ್ಲಿ ಅದ್ಧೂರಿ ಟ್ರೇಲರ್ ಲಾಂಚ್ ಹಾಗೂ ಹಿಟ್ ಸಾಂಗ್ ಟ್ರೆಂಡ್… ಇತ್ತೀಚೆಗಷ್ಟೇ ಮೆಜೆಸ್ಟಿಕ್ ಬಳಿಯ ಎಎಂಬಿ ಮಲ್ಟಿಪ್ಲೆಕ್ಸ್‌ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಈ […]

CHARGESHEET MOVIE: ಗಾಂಧಿನಗರದಲ್ಲಿ ‘ಚಾರ್ಜ್‌ಶೀಟ್’ ಸೋಲೋ ಎಂಟ್ರಿ: ಕ್ರೈಮ್ ಥ್ರಿಲ್ಲರ್ ಪ್ರಿಯರಿಗೆ ಹಬ್ಬ…

ಈ ವಾರ ಗಾಂಧಿನಗರದಲ್ಲಿ ಸೋಲೋ ಎಂಟ್ರಿ...

Photo Credits: @chetana_khot (Instagram) ಸಾಮಾನ್ಯವಾಗಿ ಪ್ರತಿ ವಾರ ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳು ಚಿತ್ರಮಂದಿರಗಳ ಬಾಗಿಲು ತಟ್ಟುವುದು ಸಹಜ. ಆದರೆ ಈ ವಾರ ಅಚ್ಚರಿಯ ರೀತಿಯಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಒಂದೇ ಒಂದು ಕನ್ನಡ ಸಿನಿಮಾ ಮಾತ್ರ ರಿಲೀಸ್ ಆಗುತ್ತಿದೆ. ವೆಂಕಟ್ ಭಾರದ್ವಾಜ್ ನಿರ್ದೇಶನದ ಹಾಗೂ ನೈಜ ಘಟನೆ ಆಧಾರಿತ ‘ಚಾರ್ಜ್‌ಶೀಟ್’ ಚಿತ್ರವೇ ಆ ಸೋಲೋ ಎಂಟ್ರಿ ನೀಡುತ್ತಿರುವ ಏಕೈಕ ಸಿನಿಮಾ. ‘ಕಾಂತಾರ’ ನಟಿ ಸಪ್ತಮಿ ಗೌಡ ತಂದೆಯ ನೈಜ ಕಥಾಹಂದರ… ಈ ಸಾಹಸಮಯ ಕ್ರೈಮ್ ಥ್ರಿಲ್ಲರ್ ಸಿನಿಮಾಗೆ […]

MADHURI DIXIT KANNADA DEBUT: ಶಿವಣ್ಣನ ‘ಎ ಫಾರ್ ಆನಂದ್’ಗೆ ಮಾಧುರಿ ದೀಕ್ಷಿತ್ ಎಂಟ್ರಿ? ಗಾಂಧಿನಗರದಲ್ಲಿ ಶುರುವಾಯ್ತು ಭಾರಿ ಚರ್ಚೆ…

ಸ್ಯಾಂಡಲ್ವುಡ್ಗೆ ಬಾಲಿವುಡ್ನ 'ಧಕ್ ಧಕ್' ಬೆಡಗಿ? ...

Photo Credits: @puneethonline (Instagram)                        @madhuridixitnene (Instagram) ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಎ ಫಾರ್ ಆನಂದ್’ ಸಿನಿಮಾ ದಿನದಿಂದ ದಿನಕ್ಕೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕುತ್ತಿದೆ. ‘ಘೋಸ್ಟ್’ ಚಿತ್ರದ ಸೂಪರ್ ಸಕ್ಸಸ್ ನಂತರ ನಿರ್ದೇಶಕ ಶ್ರೀನಿ ಹಾಗೂ ಶಿವಣ್ಣ ಮತ್ತೆ ಒಂದಾಗುತ್ತಿದ್ದು, ಈ ಬಾರಿಯೂ ಬಿಗ್ ಸರ್ಪ್ರೈಸ್ ನೀಡಲು ಸನ್ನದ್ಧರಾಗಿದ್ದಾರೆ. ಈ ಚಿತ್ರಕ್ಕೆ ಬಾಲಿವುಡ್‌ನ ಎವರ್‌ಗ್ರೀನ್ ನಟಿ ಮಾಧುರಿ ದೀಕ್ಷಿತ್ ಅವರನ್ನು ಕರೆತರಲು ಚಿತ್ರತಂಡ ಸದ್ದಿಲ್ಲದೇ ಬೃಹತ್ ಮಾತುಕತೆ ನಡೆಸುತ್ತಿದೆ ಎಂಬ […]

YASH RADHIKA PANDIT LOVE STORY: “ನನ್ನ ಫೇವರಿಟ್ ನೀನು”: ಯಶ್-ರಾಧಿಕಾ ನಿಶ್ಚಿತಾರ್ಥಕ್ಕೆ 10 ವರ್ಷ, ವೀಡಿಯೋ ವೈರಲ್…

ಕಡಲ ತೀರದಲ್ಲಿ ನೆರವೇರಿದ್ದ ಆ ಶ್ರೇಷ್ಠ ಘಳಿಗೆಗೆ 10 ವರ್ಷ...

Photo Credits: @iamradhikapandit (Instagram) ಕನ್ನಡ ಚಿತ್ರರಂಗದಲ್ಲಿ ಪ್ರೀತಿ ಮತ್ತು ಪರಸ್ಪರ ಗೌರವಕ್ಕೆ ಅತ್ಯುತ್ತಮ ಉದಾಹರಣೆಯಾಗಿ ನಿಲ್ಲುವ ಅಪರೂಪದ ಜೋಡಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್. ಇಬ್ಬರ ನಡುವಿನ ಸೌಹಾರ್ದಯುತ ಬಾಂಧವ್ಯ ಮತ್ತು ಅನ್ಯೋನ್ಯತೆಯನ್ನು ಕಂಡು ಲಕ್ಷಾಂತರ ಅಭಿಮಾನಿಗಳು ತಮ್ಮ ನಿಜ ಜೀವನಕ್ಕೆ ಸ್ಪೂರ್ತಿಯಾಗಿ ಸ್ವೀಕರಿಸಿದ್ದಾರೆ. ಅಂದು ಗೋವಾದ ಸಮ್ಮೋಹಕ ಸಮುದ್ರದ ದಂಡೆಯಲ್ಲಿ ಉಂಗುರ ಬದಲಾಯಿಸಿಕೊಂಡು ಹೊಸ ಬಾಳಿಗೆ ಕಾಲಟ್ಟ ಈ ಜೋಡಿಯ ನಿಶ್ಚಿತಾರ್ಥಕ್ಕೆ ಈಗ ದಶಕದ ಸಂಭ್ರಮ. ರಾಧಿಕಾ ಕಂಡಿದ್ದ ಕನಸನ್ನು ನನಸು […]

PARAPPANA AGRAHARA CCB SEARCH: ಜೈಲಿನಲ್ಲಿ ಸಿಸಿಬಿ ಶಾಕ್: ದರ್ಶನ್ ಕೊಠಡಿ ಜಾಲಾಟ, ಪ್ರಜ್ವಲ್ ಬಳಿ ಮೊಬೈಲ್ ಸಿಕ್ಕಿ ಎಫ್‌ಐಆರ್…

ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಸಿಬಿ ದಿಢೀರ್ ದಾಳಿ...

Photo Credits: @prajwal_revanna_(Instagram) ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ಪೊಲೀಸರು ನಡೆಸಿದ ದಿಢೀರ್ ಪರಿಶೀಲನೆ ಜೈಲಿನ ಕೈದಿಗಳಿಗೆ ದೊಡ್ಡ ಶಾಕ್ ನೀಡಿದೆ. ಮಾಫಿ ಸಾಕ್ಷಿ ಅರ್ಜಿಯ ಆತಂಕದಲ್ಲಿದ್ದ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಇದ್ದ ಬ್ಯಾರಕ್‌ಗಳನ್ನು ಸಿಸಿಬಿ ಅಧಿಕಾರಿಗಳು ಜಾಲಾಡಿದ್ದಾರೆ. ಆಗಸ್ಟ್ 11ರಂದು ನಡೆದ ಈ ಕಟ್ಟುನಿಟ್ಟಿನ ಸರ್ಚ್ ಆಪರೇಷನ್ ವೇಳೆ ದರ್ಶನ್ ಬ್ಯಾರಕ್‌ನಲ್ಲಿ ಏನೂ ಸಿಗದಿದ್ದರೂ, ಪ್ರಜ್ವಲ್ ರೇವಣ್ಣ ಕೊಠಡಿಯಲ್ಲಿ ಮೊಬೈಲ್ ಪತ್ತೆಯಾಗಿ ಭಾರಿ ಸಂಚಲನ ಮೂಡಿಸಿದೆ. ದರ್ಶನ್ ಬ್ಯಾರಕ್ ಜಾಲಾಡಿದ […]

DR RAJKUMAR ABDUCTION CASE: ಭೀಮನ ಅಮಾವಾಸ್ಯೆಯಂದೇ ನಡೆದಿತ್ತು ಆ ಕರಾಳ ಘಟನೆ: ಅಣ್ಣಾವ್ರ ಅಪಹರಣದ ಹಿಂದಿದ್ದ ನಿಜವಾದ ರಹಸ್ಯವೇನು?

ಭೀಮನ ಅಮಾವಾಸ್ಯೆಯಂದೇ ನಡೆದಿತ್ತು ಆ ಕರಾಳ ಘಟನೆ...

Photo Credits: @puneethfc_17 (Instagram) ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ, ವರನಟ ಡಾ. ರಾಜ್‌ಕುಮಾರ್ ಅವರ ಜೀವನದಲ್ಲಿ ನಡೆದ ಆ ಒಂದು ಘಟನೆ ಇಡೀ ಕರ್ನಾಟಕವನ್ನೇ ಉಸಿರುಬಿಗಿಹಿಡಿದು ಕೂರುವಂತೆ ಮಾಡಿತ್ತು. ಆಗಷ್ಟೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಎಸ್. ಎಂ. ಕೃಷ್ಣ ಅವರ ಸರ್ಕಾರಕ್ಕೆ ಎದುರಾದ ಅತಿ ದೊಡ್ಡ ಕಾನೂನು ಮತ್ತು ಸುವ್ಯವಸ್ಥೆಯ ಸವಾಲು ಎಂದರೆ ಅದು ಅಣ್ಣಾವ್ರ ಅಪಹರಣ. ಪತಿಯ ಆಯುಷ್ಯಕ್ಕಾಗಿ ಪತ್ನಿ ಪೂಜೆ ಸಲ್ಲಿಸುವ ಪವಿತ್ರ ಭೀಮನ ಅಮಾವಾಸ್ಯೆಯಂದೇ ನಡೆದ ಆ ಕರಾಳ ಘಟನೆ ಇಂದಿಗೂ […]

YASH AAP KI ADALAT: ‘ಆಪ್ ಕಿ ಅದಾಲತ್’ನಲ್ಲಿ ರಾಕಿಂಗ್ ಸ್ಟಾರ್ ಧಮಾಕಾ: ದೇಶದ ಪ್ರತಿಷ್ಠಿತ ಶೋ ಏರಿದ ಮೊದಲ ಕನ್ನಡಿಗ…

'ಆಪ್ ಕಿ ಅದಾಲತ್' ಕಟಕಟೆ ಏರಿದ ರಾಕಿಂಗ್ ಸ್ಟಾರ್...

Photo Credits: @rajatsharmalive (Instagram) ರಾಕಿಂಗ್ ಸ್ಟಾರ್ ಯಶ್ ತಮ್ಮ ಅಭಿನಯ ಮತ್ತು ಯೋಚನೆಗಳ ಮೂಲಕ ದಿನದಿಂದ ದಿನಕ್ಕೆ ಗ್ಲೋಬಲ್ ಮಟ್ಟದಲ್ಲಿ ಹೊಸ ಹೊಸ ಇತಿಹಾಸ ಬರೆಯುತ್ತಿದ್ದಾರೆ. ಅವರ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಪ್ರಾಜೆಕ್ಟ್‌ಗಳಾದ ‘ಟಾಕ್ಸಿಕ್’ ಹಾಗೂ ‘ರಾಮಾಯಣ’ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡಲು ಸಜ್ಜಾಗಿವೆ. ಇದೀಗ ದೇಶದ ಅತ್ಯಂತ ಪ್ರತಿಷ್ಠಿತ ಮತ್ತು ಹಳೆಯ ಟಿವಿ ಶೋ ‘ಆಪ್ ಕಿ ಅದಾಲತ್’ ಕಟಕಟೆಯಲ್ಲಿ ನಿಲ್ಲುವ ಮೂಲಕ ಯಶ್ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ನೆಟ್ಟಿದ್ದಾರೆ. ರಾಷ್ಟ್ರೀಯ ಮಟ್ಟದ […]

PABBAR MOVIE: ‘ಪಬ್ಬಾರ್’ ಶೂಟಿಂಗ್ ಕಂಪ್ಲೀಟ್: ಗೀತಾ ಪಿಕ್ಚರ್ಸ್ ಕ್ರೈಮ್ ಥ್ರಿಲ್ಲರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್…

ಗೀತಾ ಪಿಕ್ಚರ್ಸ್ ನಿರ್ಮಾಣದ 'ಪಬ್ಬಾರ್' ಚಿತ್ರೀಕರಣ ಪೂರ್ಣ...

Photo Credits: @dhanya_ramkumar (Instagram)                         @chandan_gowda_photography (Instagram) ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರ ಗೀತಾ ಪಿಕ್ಚರ್ಸ್ ಸಂಸ್ಥೆಯ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ಪಬ್ಬಾರ್’ ಸಿನಿಮಾ ಸದ್ದಿಲ್ಲದೇ ಶೂಟಿಂಗ್ ಮುಗಿಸಿದೆ. ಶಾಖಾಹಾರಿ ಖ್ಯಾತಿಯ ಸಂದೀಪ್ ಸುಂಕದ್ ನಿರ್ದೇಶನದ ಈ ಚಿತ್ರದಲ್ಲಿ ಧೀರೇನ್ ರಾಮ್‌ಕುಮಾರ್ ಪೊಲೀಸ್ ಅಧಿಕಾರಿಯಾಗಿ ಹಾಗೂ ಅಮೃತಾ ಪ್ರೇಮ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಹಿಮಾಚಲ ಪ್ರದೇಶದ ರಮಣೀಯ ಪಬ್ಬಾರ್ ಕಣಿವೆಯ ಹಿನ್ನೆಲೆಯಲ್ಲಿ ಸಾಗುವ ಈ ಕ್ರೈಮ್ ಥ್ರಿಲ್ಲರ್ ಸಿನಿಮಾ ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಅಡಿ ಇಟ್ಟಿದೆ. […]

NAYANTHARA-GEETU MOHANDAS: ‘ಟಾಕ್ಸಿಕ್’ ವೇದಿಕೆಯಲ್ಲಿ 20 ವರ್ಷದ ರಹಸ್ಯ ಬಿಚ್ಚಿಟ್ಟ ನಯನತಾರಾ-ಗೀತು: ಇವರಿಬ್ಬರು ನಟಿಸಿದ ‘ಆ’ ಹಿಟ್ ಮೂವಿ ಯಾವುದು?…

20 ವರ್ಷಗಳ ಹಳೆಯ ಬಾಂಧವ್ಯ...

Photo Credits: @nayanthara (Instagram) @geetu_mohandas (Instagram) ಇತ್ತೀಚೆಗೆ ನಡೆದ ‘ಟಾಕ್ಸಿಕ್’ ಸಿನಿಮಾದ ಅದ್ಧೂರಿ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಎಲ್ಲರ ಕಣ್ಣುಗಳು ‘ಲೇಡಿ ಸೂಪರ್ ಸ್ಟಾರ್’ ನಯನತಾರಾ ಅವರ ಮೇಲಿದ್ದವು. ಚಿತ್ರರಂಗದ ಯಾವುದೇ ಪ್ರಚಾರದ ವೇದಿಕೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ನಯನತಾರಾ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು ಪ್ರೇಕ್ಷಕರಿಗೆ ದೊಡ್ಡ ಸರ್ಪ್ರೈಸ್ ನೀಡಿತ್ತು. ಈ ವಿಶೇಷ ವೇದಿಕೆಯಲ್ಲಿ ನಿರ್ದೇಶಕಿ ಗೀತು ಮೋಹನ್‌ದಾಸ್ ಜೊತೆ ತಮಗಿರುವ 20 ವರ್ಷಗಳ ಹಳೆಯ ನೆನಪನ್ನು ಹಂಚಿಕೊಂಡು ಅವರು ಭಾವುಕರಾಗಿದ್ದಾರೆ. ‘ಟಾಕ್ಸಿಕ್’ ವೇದಿಕೆಯಲ್ಲಿ ನಯನತಾರಾ ಪ್ರತ್ಯಕ್ಷ… […]

THARANOORADHA: ಬೆಳ್ಳಿಪರದೆಗೆ ಬಂದು 40 ವರ್ಷ: ಸುದೀರ್ಘ ಸಿನಿಪಯಣ ನೆನೆದು ಭಾವುಕ ಪೋಸ್ಟ್ ಹಂಚಿಕೊಂಡ ನಟಿ ತಾರಾ…

ಬೆಳ್ಳಿಪರದೆಗೆ ಬಂದು 40 ವರ್ಷ...

Photo Credits: @dr.tharanooradha_official (Instagram) ಕನ್ನಡ ಚಿತ್ರರಂಗದ ಖ್ಯಾತ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ಡಾ. ತಾರಾ ಅನುರಾಧ ಅವರು ಬೆಳ್ಳಿಪರದೆಗೆ ಕಾಲಿಟ್ಟು (ಅ.10)  ಸರಿ ಸುಮಾರು 40 ವರ್ಷಗಳು ಪೂರೈಸಿವೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಾಲ್ಕು ದಶಕಗಳ ಈ ಅದ್ಭುತ ಸಿನಿಪಯಣವನ್ನು ನೆನಪಿಸಿಕೊಂಡು ಸುದೀರ್ಘ ಹಾಗೂ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಸುಂದರ ಕಲಾ ಪಯಣಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ಹಾಗೂ ಕನ್ನಡಿಗರ ಪ್ರೀತಿಗೆ ಶಿರಬಾಗಿ ಧನ್ಯವಾದ ತಿಳಿಸಿರುವ ತಾರಾ ಅವರ ಈ ಪೋಸ್ಟ್ ಈಗ ಸಖತ್ […]